ವೃದ್ಧರ ಯೋಗಕ್ಷೇಮವನ್ನು ಹೆಚ್ಚಿಸುವಲ್ಲಿ ಯೋಗದ ಪಾತ್ರ
ನಮ್ಮ ಜೀವನದ ಮುಪ್ಪಿನಲ್ಲಿ, ಜೀವಾತ್ಮವನ್ನು ಪರಮಾತ್ಮನೊಂದಿಗೆ ಸಂಧಿಸುವ ಮಹತ್ವದ ಕಾಲ ಘಟ್ಟದಲ್ಲಿ ನಮ್ಮ ದೇಹ ಯೋಗ ಸಾಧನೆಗೆ ಸಹಕರಿಸದೆ ಪ್ರತಿನಿತ್ಯ ನಾನಾ ವಿಧದ ಶಾರೀರಿಕ, ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಗಳು ನಮ್ಮನ್ನು ಕಾಡುತ್ತಾ ಅನಾರೋಗ್ಯದ ತುತ್ತ ತುದಿಗೆ ತಲುಪಿಸುತ್ತದೆ. ಅದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಸರಳವಾದ ಯೋಗಾಭ್ಯಾಸವು ವಯಸ್ಸಾದ ವ್ಯಕ್ತಿಗಳಿಗೆ ಸಂಜೀವನಿ ಅಂದರೆ ಅತಿಶಯೋಕ್ತಿ ಅನ್ನಿಸುವುದಿಲ್ಲ. ಈ ಸಮಸ್ಯೆಗಳನ್ನು ನಿವಾರಿಸಲು ಮತ್ತು ಆರೋಗ್ಯಕರ, ಸಂತೋಷದ…
ಜೀವಟspaceವ್ಯಾಖ್ಯಾನ
ಒಂದಾನೊಂದು ಕಾಲದಲ್ಲಿ ಒಬ್ಬ ಯೋಗ ಭಿಕ್ಷುವಿದ್ದನು. ಅವನು ಸಾಮಾನ್ಯರಂತಲ್ಲದೆ ವೈರಾಗ್ಯವೇ ಆದಿಯಾಗಿ ಮನಸ್ಸಿನಲ್ಲಿ ಬೌದ್ಧಿಕ ಪಕ್ವತೆಯನ್ನು ಹೊಂದಿದ್ದು ಸದಾಕಾಲ ಸಮಾಧಿ ಸ್ಥಿತಿಯಲ್ಲಿದ್ದು ಧ್ಯಾನವನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದನು. ವಿಷಯ ಸುಖಗಳಿಂದ ದೂರವಾಗಿಯೇ ಇದ್ದನು. ಹೀಗೇ ಬಹುಕಾಲ ಕಳೆಯಿತು. ಒಮ್ಮೆ ಆ ಭಿಕ್ಷುಕ ಸಮಾಧಿಯಿಂದ ಎಚ್ಚೆತ್ತು ಏಕಾಗ್ರ ಮನಸ್ಕನಾಗಿ ಕುಳಿತು ಮುಂದೇನು ಮಾಡಬೇಕೆಂದು ಯೋಚಿಸತೊಡಗಿದ್ದನು.“ಬಹಳ ಕಾಲ ನಾನು ಲೌಕಿಕದಲ್ಲಿ ಮುಳುಗದೆ ಸನ್ಯಾಸಿಯಂತೆ ವೈರಾಗ್ಯ ಮನೋಭಾವದಿಂದ…
Yogaspandana – ಯೋಗಸ್ಪಂದನಯೋಗವನ್ನು ಆನ್ಲೈನ್ನಲ್ಲಿ ಗ್ರಹಿಸಿ
ಕರ್ನಾಟಕ ರಾಜ್ಯದ ಬೆಂಗಳೂರು ಹೃದಯ ಭಾಗದಲ್ಲಿ ಇರುವ ಖ್ಯಾತ ಆರ್. ವಿ. ಇನ್ಸ್ಟಿಟ್ಯೂಟ್ ನಾ ಪ್ರೊಫೆಸರ್ ಹಾಗೂ ನಿರ್ದೇಶಕರು ಆಗಿರುವ ಡಾಕ್ಟರ್ ಪುರುಷೋತ್ತಮ್ ಬಂಗ್ ರವರು ದಿನಾಂಕ: 23, 24 ನೇ ಸೆಪ್ಟೆಂಬರ್ 2023 ಬೆಳಿಗ್ಗೆ 11 ಗಂಟೆಗೆ ಯೋಗ ಸ್ಪಂದನ ಅನ್ನೋ ಕಾರ್ಯಗಾರದಲ್ಲಿ ಅಷ್ಟಾಂಗ ಯೋಗ ವಿಷಯದ ಬಗ್ಗೇ ಕಾರ್ಯಗಾರವನ್ನು ನಡೆಸಿಕೊಟ್ಟರು. ಈ ಕಾರ್ಯಗಾರದಲ್ಲಿ ಅಷ್ಟಾಂಗ ಯೋಗದ ಯಮನಿಯಮಆಸನಪ್ರಾಣಯಾಮಪ್ರತ್ಯಾಹಾರಧಾರಣಧ್ಯಾನಸಮಾಧಿ ಯ ಬಗ್ಗೆ…
ಹೆಸರು ಬೇಳೆ ದೋಸೆ
ಭರತ ಭೂಮಿಯ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಹೆಸರು ಬೇಳೆಯ ಬಳಕೆ ದಾಖಲಾಗಿದ್ದು ಮನುಕುಲದೆ ಆರೋಗ್ಯಕ್ಕೆ ಬೇಕಾಗುವ ನಾನಾ ರೀತಿಯ ಪೋಷಣೆಗಳನ್ನು ಹೊಂದಿರುವ ಒಂದು ಬಗೆಯ ಪ್ರಾಚೀನ ದ್ವಿದಳ ಧಾನ್ಯ.ಅತೀ ಹೆಚ್ಚು ಪ್ರೋಟೀನ್ ಹಾಗೂ ವಿವಿಧ ಖನಿಜಾಂಶಗಳನ್ನು ಒಳಗೊಂಡಿರುವುದರಿಂದಾ ದೇಹದಲ್ಲಿರುವ ಮೂಳೆ, ಚರ್ಮ, ಸ್ನಾಯುಗಳ ಆರೋಗ್ಯವನ್ನು ವೃದ್ಧಿಸಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಭದಿಸಿದ ಆನೇಕ ಕಾಯಿಲೆಗಳು ಕ್ಯಾನ್ಸರ್, ಚರ್ಮ ರೋಗಗಳೂ ಮುಂತಾದ ಹತ್ತು ಹಲವಾರು…
ಪರಿವೃತ್ತ ಜಾನು ಶೀರ್ಷಾಸನ
ಮಾಡುವ ವಿಧಾನ : ದಂಡಾಸನದಲ್ಲಿ ಕುಳಿತುಕೊಳ್ಳಬೇಕು.ಬಲಗಾಲನ್ನು ಬಲಕ್ಕೆ ನೇರವಾಗಿ ಚಾಚಬೇಕು.ಎಡ ಮೊಣಕಾಲನ್ನು ಮಡಚಿ ಹಿಮ್ಮಡಿಯನ್ನು ತೊಡೆಸಂಧಿಗೆ ತೆಗೆದುಕೊಂಡು ಬರಬೇಕು.ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಚಾಚಿದ ಬಲ ಪಾದದ ಕಡೆಗೇ ವಾಲಬೇಕು. ಹಾಗೆ ಎದೆಯನ್ನೂ ಮೇಲಕ್ಕೆ ತಿರುಗಿಸಿ ಎರಡು ಕೈಗಳಿಂದ ಬಲ ಪಾದವನ್ನು ಹಿಡಿದುಕೊಂಡು ದೃಷ್ಟಿಯನ್ನು ಆಕಾಶದ ಕಡೆಗೆ ತಿರುಗಿಸಬೇಕು.ಅಂತಿಮ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸುತ್ತಾ ಇರಬೇಕು.ಸ್ವಲ್ಪ ಸಮಯದ ನಂತರ ಮತ್ತೆ ಹಸ್ತಗಳನ್ನು ಮೇಲಕ್ಕೆ…
ಭಗವದ್ಗೀತೆಯಲ್ಲಿ ಯೋಗ
ಏಳುನೂರು ಶ್ಲೋಕಗಳ ಈ ಗೀತೆಯು ತನ್ನ ಸಣ್ಣ ಪರಿಧಿಯಲ್ಲಿ ಪ್ರಪಂಚಕ್ಕೆ ಪುರಾತನ ಭಾರತದ ಕೊಡುಗೆಯಾದ ಅತ್ಯುತ್ತಮ ತತ್ವಕಾರ ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡಿದೆ. ಉನ್ನತವಾದ ತತ್ವ ಬೋಧನೆ ಸರಳ ಸುಂದರವಾದ ಪದ ಪ್ರಯೋಗಗಳಿಂದ ಮಧುರವಾದ ಶ್ಲೋಕರೂಪದಲ್ಲಿ ಹೆಣೆಯಲ್ಪಟ್ಟಿದ್ದು ಅಭ್ಯಾಸಮಾಡಲು ಮನೋಹರವಾಗಿದೆ. ಬೋಧನೆಯು ಅದ್ಭುತವಾದ ಕ್ರಮದಿಂದ ಪ್ರತಿಪಾದಿಸಲ್ಪಟ್ಟಿದ್ದು ವಿಚಾರ ಪ್ರಚೋದಕವಾಗಿದೆ ಮತ್ತು ಅತ್ಯಂತ ಉದಾತ್ತವಾದ ಸತ್ಯವನ್ನು ಪ್ರತಿಪಾದಿಸಿರುವುದು ಒಂದು ಅತೀವ ಆಸಕ್ತಿ ಮೂಡಿಸುವ ಗ್ರಂಥವಾಗಿದೆ….
ಶಾಸ್ತ್ರ, ದರ್ಶನ, ಮತ್ತು ಸಂಬಂಧ – ಯೋಗದ ಮಿತಿಯಲ್ಲಿ
ಯಾವುದೇ ಒಂದು ವಿಷಯ ಗ್ರಾಂಥಿಕ ರೂಪವನ್ನು ಪಡೆದಾಗ ಅದನ್ನು ಶಾಸ್ತ್ರ ಎಂಬುದಾಗಿ ಕರೆಯುತ್ತಾರೆ. ಅರ್ಥಾತ್ ಶಾಸ್ತ್ರಕ್ಕೆ ಒಂದು ಚೌಕಟ್ಟಿದೆ, ಅಳತೆ, ಬದ ಇವೆ. ಇವೆಲ್ಲವುಗಳನ್ನು ಹೊಂದಿದ್ದು ಶಾಸ್ತ್ರ ವಾಗುತ್ತದೆ. ಯಾವುದೇ ಗ್ರಂಥಕ್ಕೆ ಶಾಸ್ತ್ರತ್ವ ಬರುವುದು ಅಳತೆ ಗೋಲಿಗೆ ಹೊಂದಿಸಿದಾಗ. ಅಳತೆ ಮೀರಿದ್ದು ಶಾಸ್ತ್ರವಲ್ಲ. ಅನುಬಂಧ ಚತುಷ್ಟಯ ಶಾಸ್ತ್ರದ ಅಳತೆ ಗೋಲು ಏನು? ಪ್ರತಿಯೊಂದು ಶಾಸ್ತ್ರಕ್ಕೆ ಅನುಬಂಧ ಚತುಷ್ಟಯ ಎಂಬ ನಾಲ್ಕಂಕಿ ಸೂತ್ರ ಅನಿವಾರ್ಯ….
ಯೋಗವಾಸಿಷ್ಠದ ಕಥೆಗಳುಉಪಮನ್ಯುವಿನ ಕಥೆ
(ಇದು ಮಹಾಭಾರತದ ಅನುಶಾಸನ ಪರ್ವದಲ್ಲಿ ಬಂದಿದೆ.) ಪೂರ್ವಕಾಲದಲ್ಲಿ ವ್ಯಾಘ್ರಪಾದನೆಂಬ ಒಬ್ಬ ಋಷಿಗೆ ʻಉಪಮನ್ಯುʻಎಂಬ ಮಗನಿದ್ದನು.ಅವನು ಒಂದುಸಲ ತನ್ನ ಜೊತೆಗಾರರಾದ ಇತರ ಮುನಿಬಾಲಕರೊಡನೆ ತಾಯಿಯ ಬಳಿಗೆ ಬಂದು, ʻಅಮ್ಮಾ,ನನಗೆ ಹಾಲು ಕೊಡು,ಕುಡಿಯಲು ಆಸೆಯಾಗುತ್ತಿದೆʻ ಎಂದು ಪೀಡಿಸಿದನು.ಆದರೆ ಆ ಋಷಿದಂಪತಿಗಳು ಕಡುಬಡವರಾಗಿದ್ದರು.ಹಾಲಿಗೂ ಗತಿಯಿರಲಿಲ್ಲ. ಆದರೆ ಹುಡುಗರಿಗೆ ಸಹಜವಾದ ರೀತಿಯಲ್ಲಿ ಉಪಮನ್ಯು ಹಠ ಹಿಡಿದು ಅಳುವುದಕ್ಕೇ ಪ್ರಾರಂಭಿಸಿದನು.ಆಗ,ಅವನ ತಾಯಿಯು ಉಪಾಯದಿಂದ ಅಕ್ಕಿಹಿಟ್ಟನ್ನು ನೀರಿನೊಂದಿಗೆ ಬೆರೆಸಿ,ಆ ಬಿಳಿಯ ನೀರನ್ನೇ…
ಆರೋಗ್ಯಧಾಮ, ಎಸ್-ವ್ಯಾಸ, ಬೆಂಗಳೂರಿನ ರೆಸಿಡೆನ್ಶಿಯಲ್ ಇಂಟಿಗ್ರೇಟಿವ್ ಹೆಲ್ತ್ ಹೋಮ್.
ಮೂಲಕ ಡಾ.ಸುಚಿತ್ರಾ ಪಾಟೀಲ. BAMS,MD,PhD ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (S-VYASA) ವು 600 ಹಾಸಿಗೆಗಳ ಒಳರೋಗಿ ಚಿಕಿತ್ಸಾ ಸೌಲಭ್ಯವಾದ ಆರೋಗ್ಯಧಾಮವನ್ನು ಒಳಗೊಂಡಿದೆ. ಇದು ಸಂಶೋಧನೆಯ ಆಧಾರದ ಮೇಲೆ ಸ್ವಯಂ-ಗುಣಪಡಿಸುವ ತಂತ್ರಗಳನ್ನು ಬಳಸುವ ಸಮಗ್ರ ಸಂಶೋಧನಾ ಆರೋಗ್ಯದ ಮನೆಯಾಗಿದೆ. ಈ ವಿಶ್ವವಿದ್ಯಾನಿಲಯವು ಪ್ರಮುಖ ಯೋಗ ಸಂಶೋಧನಾ ಸಂಸ್ಥೆಯಾಗಿದ್ದು, ಆರೋಗ್ಯ, ಶಿಕ್ಷಣ, ನಿರ್ವಹಣೆ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಯೋಗದ ಕುರಿತು ಪ್ರಮುಖ ರಾಷ್ಟ್ರೀಯ…
ಯೋಗಾಚಾರ್ಯ ಡಾ.ಆನಂದ ಬಾಲಯೋಗಿ ಭವನಾನಿ, ಸಂಪಾದಕರು
ಪ್ರಾಣಾಯಾಮವು ಮನೋದೈಹಿಕ ರೋಗಗಳಿಗೆ ಅತ್ಯಂತ ಉಪಯುಕ್ತ ಹಾಗೂ ಇದನ್ನು ಮೊನೋಥೆರಪಿಯಾಗಿ ಉಪಯೋಗಿಸುತ್ತಾರೆ. ಪ್ರಾಣಾಯಾಮವನ್ನು ಅಭ್ಯಾಸ ಮಾಡುವಾಗ ಸರಿಯಾದ ಆಹಾರ ಮತ್ತು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಬೇಕು. ಏಕೆಂದರೆ ದೇಹವು ಸ್ವತಃ ಗುಣಪಡಿಸುವಂತಹ ಜೀವಸತ್ವಗಳು, ಖನಿಜಗಳು ಮತ್ತು ನೀರಿನಂತಹ ಕಚ್ಚಾ ವಸ್ತುಗಳ ಅಗತ್ಯವನ್ನು ಪ್ರಾಣಾಯಾಮದ ಮೂಲಕ ಪಡೆಯುತ್ತದೆ.ಹಠಯೋಗ ಪ್ರದೀಪಿಕಾ ಪ್ರಕಾರ, ಪ್ರಾಣಾಯಾಮದಿಂದ ನರಗಳನ್ನು ಶುದ್ಧೀಕರಿಸಿದಾಗ ದೇಹವು ತೆಳ್ಳಗೆ ಮತ್ತು ಕಾಂತಿಯುತವಾಗುತ್ತದೆ, ಜಠರಾಗ್ನಿ ಹೆಚ್ಚಾಗುತ್ತದೆ, ಆಂತರಿಕವಾಗಿಯೂ…